ಸಮಾಜದಲ್ಲಿ ಮನುಷ್ಯನೊಬ್ಬ ಸಂಘಜೀವಿ. ಮಗುವಾಗಿ ಹುಟ್ಟುತ್ತಲೇ ಭಾವಗಳ ಬಂಧ ಬೆಸೆದು ಬದುಕನ್ನು ರೂಪಿಸುವ ಸಮಾಜದಲ್ಲಿ ಬೆರೆತು ಬಾಳುವ ಮೌಲ್ಯ ಕಲಿಯುತ್ತಲೇ ಬೆಳೆಯುತ್ತಾನೆ .. ಆ ಬಂಧದ ಮೊದಲ ಕೊಂಡಿ ಹುದುಗಿರುವುದೇ ನಂಬಿಕೆಯಲ್ಲಿ. ಅಮ್ಮನ ಅಪ್ಪುಗೆಯಲ್ಲಿ ಆಕೆಯ ತನುವಿನ ಅಮೃತದ ಸವಿಯಲ್ಲಿ ಆಕೆಯ ನುಡಿಯಲ್ಲಿ ಈ ನಂಬುಗೆಯ ಅಚ್ಚು ಮೊದಲು ಮೂಡುತ್ತದೆ. ಆಮೇಲೆ ಅಪ್ಪ, ಅಣ್ಣ , ತಂಗಿ, ತಮ್ಮ , ಬಳಗ ಹೀಗೆ ಸಮಾಜಮುಖಿಯಾಗುತ್ತ ಸಾಗುತ್ತದೆ. ಹಾಗಾದಲ್ಲಿ ಉತ್ತಮ ಸಮಾಜದ ನಿರ್ಮಾಣದಲ್ಲಿ ನಂಬಿಕೆಯ ಪಾತ್ರ ಎಷ್ಟಿದೆ ಅಲ್ಲವೇ ...
ನಂಬಿಕೆ ಅನ್ನುವು ಮನಸ್ಸಿನ ಒಂದು ಸ್ಥಿತಿ ಅಥವಾ ಭಾವ. ನಾನು ನಿನ್ನನ್ನು ನಂಬುತ್ತೇನೆ ಎಂದಾಗ ನನಗೆ ನಿನ್ನ ಮಾತಿನ ಮೇಲೆ ವಿಶ್ವಾಸ ಇದೆ ಎಂದರ್ಥವಾಗುತ್ತದೆ. ಇದ್ದುದು ಇದ್ದುದಂತೆ ಕಂಡಿತೆಂದಾಗ, ಇಲ್ಲವೆ ಬಲವಾದ ಪರಿಣಾಮದಿಂದ ಇನ್ನೊಬ್ಬನ ಮನಸ್ಸನ್ನು ನಾಟುವಂತೆ ಮಾಡಿದಾಗ , ನಾವು ಒಬ್ಬರ ಬಗ್ಗೆ ಏನು ಕಲ್ಪಿಸಿರುತ್ತೆವೋ ಅವರು ಅದನ್ನು ಉಳಿಸಿಕೊಂಡಾಗ ನಮ್ಮ ಮನಸ್ಸಿನಲ್ಲಿಅವರ ಬಗೆಗೆ ಪೂರಕವಾದ ಪ್ರಭಾವಲಯ ಉಲ್ಲಸಿತಗೊಂಡು ಪ್ರತಿಕ್ರಿಯೆಯನ್ನು ನೀಡುತ್ತದೆ .. ಅದುವೇ ನಂಬಿಕೆ . ನಂಬಿಕೆ ಗಟ್ಟಿ ಇದ್ದಾಗ ಸಂಬಂಧಗಳೂ ಗಟ್ಟಿಯಾಗಿರುತ್ತವೆ. ಈ ಭೂಮಿ ಮೇಲೆ ಒಳ್ಳೇದು ಏನೆ ನಡೆಯುತ್ತಾ ಇದ್ರೂ ನಂಬಿಕೆ ಮೇಲೆ. ಅಸತ್ಯದ ಮೇಲೆ ಇರುವ ನಂಬಿಕೆ ಲಾಭ ಇರುವ ವರೆಗೆ ಮಾತ್ರ. ಎಲ್ಲಿ ಲಾಭ ಕಮ್ಮಿಯೋ ಅಲ್ಲಿ ನಂಬಿಕೆಯೂ ಅಸ್ತಿತ್ವ ಕಳೆದುಕೊಳ್ಳುತ್ತೆ.
ನಾಸ್ತಿಕ ಮಂದಿ ದೇವರನ್ನು ನಂಬುತ್ತಾರೆ. ಆತನ ನಂಬಿಕೆಯಲ್ಲಿ ಪ್ರತಿಕ್ಷಣ ಜೀವನ ಕಳೆಯುತ್ತಾರೆ. ಒಳ್ಳೆಯದು ನಡೆದರೆ ದೇವರು ಇದ್ದಾನೆ , ಕೆಟ್ಟದು ಮಾಡಿದ್ರೆ ಎಲ್ಲ ದೇವರ ಆಟ ಅಂತ ಮುನ್ನಡೆಯುತ್ತೇವೆ. ದೇವರಿಗೆ ಹರಕೆ ಸಲ್ಲಿಸಿ ಪೂಜೆ ಮಾಡಿ ಓದದೆ ಹೋದರೆ exam ಪಾಸು ಮಾಡುತ್ತೇವೆ?.ಮನೆಯಲ್ಲಿಯಾರಿಗಾದರೂ ಜೋರು ಹುಷಾರಿಲ್ಲದ ಸಮಯ ದೇವರ ಮೊರೆ ಹೋಗುತ್ತೇವೆ .. ಆತ ಗುಣಮುಖನಾಗುತ್ತಾನೆ ಕೀರ್ತಿ ದೇವರಿಗೆ .... ಆದರೆ ಆತನ ಜೀವದ ನಾಜೂಕು ಸ್ಥಿತಿಯಲ್ಲಿ ವೈದ್ಯಕೀಯ ನೆರವು ಇದ್ದುದು ಹೌದಲ್ಲವೇ? ಅದೇ ರೀತಿ ಕಾಕತಾಳಿಯ. ಅದು ನಮ್ಮ ಪರಿಶ್ರಮದ ಫಲವಲ್ಲ ,ನಾವದನ್ನು ನಿರೀಕ್ಷೆ ಕೂಡ ಮಾಡಿರೋದಿಲ್ಲ ನಮಗೆ ಒಳ್ಳೆಯದು ಮಾಡಲೆಂದೇ ಮರೆಯಲ್ಲಿ ಕೂತಿದ್ದು ಧುತ್ತನೆ ಎದುರು ಬಂದು ನಿಲ್ಲುವ ನೆಂಟ. (ittefak ) ಹಲವಾರು ಬಾರಿ ಕಾಕತಾಳೀಯವಾಗಿ ನಡೆದ ಘಟನೆಗಳಿಂದಾಗಿ ನಂಬಿಕೆಯೂ ಮೂಡುತ್ತದೆ . ಇನ್ನಷ್ಟು ಜನರನ್ನು ನಂಬುವಂತೆ ಮಾಡುತ್ತದೆ. ಹೀಗೇ ನಂಬಿಕೆ ಮತ್ತು ಕಾಕತಾಳೀಯಗಳ ನಡುವೆ ಬದುಕು ಪಲ್ಟಿ ಹೊಡೆಯುತ್ತಾ ಸಾಗುತ್ತದೆ...........
- ಕಾವ್ಯಮಯಿ
ನಂಬಿಕೆ ಅನ್ನುವು ಮನಸ್ಸಿನ ಒಂದು ಸ್ಥಿತಿ ಅಥವಾ ಭಾವ. ನಾನು ನಿನ್ನನ್ನು ನಂಬುತ್ತೇನೆ ಎಂದಾಗ ನನಗೆ ನಿನ್ನ ಮಾತಿನ ಮೇಲೆ ವಿಶ್ವಾಸ ಇದೆ ಎಂದರ್ಥವಾಗುತ್ತದೆ. ಇದ್ದುದು ಇದ್ದುದಂತೆ ಕಂಡಿತೆಂದಾಗ, ಇಲ್ಲವೆ ಬಲವಾದ ಪರಿಣಾಮದಿಂದ ಇನ್ನೊಬ್ಬನ ಮನಸ್ಸನ್ನು ನಾಟುವಂತೆ ಮಾಡಿದಾಗ , ನಾವು ಒಬ್ಬರ ಬಗ್ಗೆ ಏನು ಕಲ್ಪಿಸಿರುತ್ತೆವೋ ಅವರು ಅದನ್ನು ಉಳಿಸಿಕೊಂಡಾಗ ನಮ್ಮ ಮನಸ್ಸಿನಲ್ಲಿಅವರ ಬಗೆಗೆ ಪೂರಕವಾದ ಪ್ರಭಾವಲಯ ಉಲ್ಲಸಿತಗೊಂಡು ಪ್ರತಿಕ್ರಿಯೆಯನ್ನು ನೀಡುತ್ತದೆ .. ಅದುವೇ ನಂಬಿಕೆ . ನಂಬಿಕೆ ಗಟ್ಟಿ ಇದ್ದಾಗ ಸಂಬಂಧಗಳೂ ಗಟ್ಟಿಯಾಗಿರುತ್ತವೆ. ಈ ಭೂಮಿ ಮೇಲೆ ಒಳ್ಳೇದು ಏನೆ ನಡೆಯುತ್ತಾ ಇದ್ರೂ ನಂಬಿಕೆ ಮೇಲೆ. ಅಸತ್ಯದ ಮೇಲೆ ಇರುವ ನಂಬಿಕೆ ಲಾಭ ಇರುವ ವರೆಗೆ ಮಾತ್ರ. ಎಲ್ಲಿ ಲಾಭ ಕಮ್ಮಿಯೋ ಅಲ್ಲಿ ನಂಬಿಕೆಯೂ ಅಸ್ತಿತ್ವ ಕಳೆದುಕೊಳ್ಳುತ್ತೆ.
ನಾಸ್ತಿಕ ಮಂದಿ ದೇವರನ್ನು ನಂಬುತ್ತಾರೆ. ಆತನ ನಂಬಿಕೆಯಲ್ಲಿ ಪ್ರತಿಕ್ಷಣ ಜೀವನ ಕಳೆಯುತ್ತಾರೆ. ಒಳ್ಳೆಯದು ನಡೆದರೆ ದೇವರು ಇದ್ದಾನೆ , ಕೆಟ್ಟದು ಮಾಡಿದ್ರೆ ಎಲ್ಲ ದೇವರ ಆಟ ಅಂತ ಮುನ್ನಡೆಯುತ್ತೇವೆ. ದೇವರಿಗೆ ಹರಕೆ ಸಲ್ಲಿಸಿ ಪೂಜೆ ಮಾಡಿ ಓದದೆ ಹೋದರೆ exam ಪಾಸು ಮಾಡುತ್ತೇವೆ?.ಮನೆಯಲ್ಲಿಯಾರಿಗಾದರೂ ಜೋರು ಹುಷಾರಿಲ್ಲದ ಸಮಯ ದೇವರ ಮೊರೆ ಹೋಗುತ್ತೇವೆ .. ಆತ ಗುಣಮುಖನಾಗುತ್ತಾನೆ ಕೀರ್ತಿ ದೇವರಿಗೆ .... ಆದರೆ ಆತನ ಜೀವದ ನಾಜೂಕು ಸ್ಥಿತಿಯಲ್ಲಿ ವೈದ್ಯಕೀಯ ನೆರವು ಇದ್ದುದು ಹೌದಲ್ಲವೇ? ಅದೇ ರೀತಿ ಕಾಕತಾಳಿಯ. ಅದು ನಮ್ಮ ಪರಿಶ್ರಮದ ಫಲವಲ್ಲ ,ನಾವದನ್ನು ನಿರೀಕ್ಷೆ ಕೂಡ ಮಾಡಿರೋದಿಲ್ಲ ನಮಗೆ ಒಳ್ಳೆಯದು ಮಾಡಲೆಂದೇ ಮರೆಯಲ್ಲಿ ಕೂತಿದ್ದು ಧುತ್ತನೆ ಎದುರು ಬಂದು ನಿಲ್ಲುವ ನೆಂಟ. (ittefak ) ಹಲವಾರು ಬಾರಿ ಕಾಕತಾಳೀಯವಾಗಿ ನಡೆದ ಘಟನೆಗಳಿಂದಾಗಿ ನಂಬಿಕೆಯೂ ಮೂಡುತ್ತದೆ . ಇನ್ನಷ್ಟು ಜನರನ್ನು ನಂಬುವಂತೆ ಮಾಡುತ್ತದೆ. ಹೀಗೇ ನಂಬಿಕೆ ಮತ್ತು ಕಾಕತಾಳೀಯಗಳ ನಡುವೆ ಬದುಕು ಪಲ್ಟಿ ಹೊಡೆಯುತ್ತಾ ಸಾಗುತ್ತದೆ...........
- ಕಾವ್ಯಮಯಿ
