ಮಳೆಯು ನಮ್ಮ ಬದುಕಿನ ಅತ್ಯದ್ಭುತವಾದ ಅನುಭವ. ಮೋಡದ ಒಡಲನ್ನು ಕರಗಿಸಿ ಹನಿಹನಿಯಾಗಿ ಭೂಮಿಯತ್ತ ಪ್ರವಹಿಸಿ ಆಕೆಯನ್ನು ಸಂಪದ್ಭರಿತಳನ್ನಾಗಿಸುವುದು ಈ ಮಳೆ. ಬಿಸಿಲು ಬೆಂಗಾಡಲ್ಲಿ ಬಸವಳಿದ ಅಸಂಖ್ಯಾತ ಜೀವಕೋಟಿಯ ಎದೆಗೆ ಪುಳಕವನ್ನು ಈಯುತ್ತಾ ತೋಯುತ್ತಾ ಹರುಷವನ್ನು ನೀಡುತ್ತೆ . ಬಾನಲ್ಲಿ ಬಣ್ಣಗಳ ಬಿಲ್ಲನ್ನು ನೆಟ್ಟಂತೆ ನಿಂತ ಜನಮನದ ಕನಸುಗಳಿಗೆ ಶೃಂಗಾರ ಬಳಿಯುತ್ತದೆ .
ಎಷ್ಟು ಸಮಯದಿಂದ ಮಳೆಗಾಗಿ ಕಾಯುತ್ತೇವೆ; ಪ್ರಾರ್ಥಿಸುತ್ತೇವೆ. ಇನ್ನಿಲ್ಲದ ತಯಾರಿಗಳನ್ನು ಮಾಡಿಕೊಂಡಿರುತ್ತೇವೆ. ಮಳೆ ತಂದ ಚಳಿ ಬಿಡಲು ಒಲೆ ಎದುರು ತಪಸ್ಸು ಕೂತು ಹಳೆಯ ಮಧುರ ನೆನಪುಗಳನ್ನೆಲ್ಲ ಹಲಸಿನ ಹಪ್ಪಳ ಮೆಲ್ಲುತ್ತಾ ಮೆಲುಕು ಹಾಕುತ್ತೇವೆ. ಹೊಸ ರೈನ್ ಕೋಟು , ಕೊಡೆ . ಬ್ಯಾಗು ಹಾಕಿಕೊಂಡು ಪೇಪರ್ ದೋಣಿ ಬಿಡುತ್ತಾ ಶಾಲೆಗೇ ನಡೆಯುವ ಪುಟಾಣಿವಿಂಡು ನಮ್ಮ ಬಾಲ್ಯವನ್ನು ನೆನೆಪಿಸದೆ ಇರದು . ತಾಯ್ನಾಡನ್ನು ಬಿಟ್ಟು ಎಷ್ಟೇ ದೂರ ನಾವು ಬಂದಿರಲಿ ಕಾಡುವುದು ಅದೇ... ಮನಸು ಭಾವನಾತ್ಮಕವಾಗಿ ಮೆಲ್ಲುವ ಸವಿಯೂ ಅಲ್ಲಿನದೇ .
ಕಿಟಕಿಯಲ್ಲಿ ಕೈ ಚಾಚಿದರೆ ಮರುಭೂಮಿಯ ಈ ಪರನಾಡಿನಲ್ಲಿ ಮಳೆಯಿಲ್ಲ; ಕಣ್ಮನ ತಣಿಸು ಝರಿಯಿಲ್ಲ; ಒಡಲನ್ನು ಹಾಯೆನಿಸುವ ಬಯಲ ಗದ್ದೆಯ ಹಸುರಿಲ್ಲ; ಹಲಸಿನ ಕಾಯಿಯ ಕಡುಬಿಲ್ಲ; ! ಎಷ್ಟೋ ಲಕ್ಷ ಜನರಿಗೆ ಉದ್ಯೋಗ ನೀಡಿದ ಮಳೆಗೆ ಇಲ್ಲಿ ಉದ್ಯೋಗವಿಲ್ಲ!
ಹೌದು ಓದುಗರೇ , ಪ್ರತಿಬಾರಿ ಮಳೆಗಾಲ ಬಂದಾಗ ನನಗೆ ನನ್ನ ನಾಡು ಯಾಕೋ ತುಂಬಾನೇ ನೆನಪಾಗುವುದು. ಜಿಟಿಜಿಟಿ ಮಳೆಯಲ್ಲಿ ನೆನೆಯಲು ಆಸೆ ಹುಟ್ಟುವುದು.ಕಲ್ಲಣಬೆಯ ಪಲ್ಯ ತಿನ್ನಲು ಬಯಕೆಯಾಗುವುದು. ಎಲ್ಲದುಕಿಂತ ಹೆಚ್ಚಾಗಿ ಮನಸ್ಸು ಅರಳುವುದು ಮಳೆಗಾಲದ ಸುಂದರ ಪುಷ್ಪಗಳಿಗಾಗಿ.
ಪ್ರಕೃತಿ ನಮ್ಮ ಬದುಕಿನಲ್ಲಿ ಎಷ್ಟು ಬೆರೆತು ಹೋಗಿದೆ ಎಂದರೆ ಋತುಮಾನಗಳು ಅಷ್ಟು ಕಡಿಮೆ ಅವಧಿಯಲ್ಲಿ ಪರಿವರ್ತನೆಯಾಗಿ ಬಂದು ನಿಂದು ತಮ್ಮಕಾಯಕ ಮುಗಿಸಿ ಹೋಗಿಬಿಟ್ಟಿರುತ್ತವೆ. ನಮಗದರ ಅರಿವೇ ಇರುವುದಿಲ್ಲ . ಹೆಸರೇ ಅರಿಯದ ಅಸಂಖ್ಯಾತ ಪುಷ್ಪಗಳು ಪೃಥ್ವಿಯ ರೋಮರೋಮದಿಂದ ಪುಟಿದೆದ್ದು ಅರಳಿ ನಿಂತಿರುತ್ತವೆ. ಕೇವಲ ಮಳೆಯ ಆಗಮನದಿಂದ ! ಸುತ್ತೆಲ್ಲ ಪರಿಸರವು ಈ ಸುಮಗಳ ಸುವಾಸನೆಯ ಸಮ್ಮಿಶ್ರ ಹೊತ್ತು ತಂಗಾಳಿಯೊಂದಿಗೆ ಬೆರೆತು ಧರೆಯೆಲ್ಲ ಪಸರಿಸುತ್ತದೆ . ಬಿಳಿ,ಹಳದಿ,ಕೆಂಪು,ನೀಲಿ ಬಣ್ಣದ ವಿನ್ಯಾಸದ ಚಿತ್ರವಿಚಿತ್ರ ಹೂ-ಹಸಿರು ಮನೆಯ ಅಕ್ಕಪಕ್ಕದಲ್ಲೇ ಮೊಳಕೆ ಬಂದು ಹೂದೊಟವನ್ನೇ ಮಾಡಿಕೊಂಡಿರುತ್ತವೆ . ಈ ಬಗೆಯ ಸವಿಯನ್ನು ಪ್ರತಿಬಾರಿಯೂ ಅನುಭವಿಸುತ್ತಿದ್ದೆ. ಚಿಕ್ಕಂದಿನಲ್ಲಿ ಅವುಗಳನ್ನು ತಂದು ಮಾಲೆ ಮಾಡಿ ಆಟ ಆಡಿದ್ದು ಉಂಟು . ಹಗಲಲ್ಲಿ ಬುಟ್ಟಿ ತುಂಬಾ ತುಂಬಿಕೊಂಡು ಮೂಲೆಯಲ್ಲಿ ಬಚ್ಚಿಟ್ಟು ಸಂಜೆ ದುರ್ವಾಸನೆ ಬೀರಿದಾಗ ಮನೆಮಂದಿಯಿಂದ ಬೈಸಿದ್ದುಂಟು. ಹೂವು ಹೆಕ್ಕಲು ಹೋಗಿ ಚೇರಟೆ ಬಸವನ ಹುಳು ಮುಟ್ಟಿ ಪೆಚ್ಚು ಮೋರೆ ಹಾಕಿದ್ದೂ ಇದೆ. ಕೆಂಪು ಬಣ್ಣದ ಹೂವೊಂದನ್ನು ಟೀಚರ್ ಗೆ ಕೊಟ್ಟು ಮುಡೀರಿ ಎಂದು ಹಲ್ಲು ಕಿಸಿದಾಗ ಪಾಪ ಆ ಮಾಡರ್ನ್ ಟೀಚರ್ ಮುಡಿಯಲಾಗದೆ ಎಸೆಯಲಾಗದೆ 'ಆಮೇಲೆ' ಎನ್ನುತ್ತಾ ಬ್ಯಾಗಲ್ಲಿ ತೂರಿಸಿದ್ದೂ ಉಂಟಲ್ಲ ! ನನ್ನನ್ನು ಕಾಡುವ ಮಳೆರಾಯನ ಸಹಸ್ರ ಪುಷ್ಪ ಕುವರಿಯರೇ ಈ ಬಾರಿಯಾದರೂ ನಿಮ್ಮ ಮೈ ಸವರಬೇಕು.
ತಾವು ಮೇಲೆದ್ದು ಅರಳಿ ಮಳೆಗಾಲ ಮುಗಿದೊಡನೆ ಅಗೋಚರವಾಗುವ ಅದ್ಭುತಗಳು ಹುಟ್ಟಿ ಬರುವಾಗ ಡಂಗೂರ ಸಾರಿ ಬರೋಲ್ಲ .ಸದ್ದಿಲ್ಲದೇ ಹೋಗಿಯೂಬಿಡುತ್ತವೆ . ಭಾವಜೀವಿಗಳು ಖಂಡಿತವಾಗಿಯೂ ಈ ವಿಸ್ಮಯವನ್ನು ಕೃತಿಗಿಳಿಸುತ್ತಾರೆ ;ಚಿತ್ರಕಾರರು ಅದರ ಸುಂದರ ಚಿತ್ರಬಿಡಿಸುತ್ತಾರೆ . ಇನ್ನು ಕ್ರಿಯಾಶೀಲರು ತಮ್ಮ ಕ್ಯಾಮೆರ ಕಣ್ಣಲ್ಲಿ ಕ್ಲಿಕ್ಕಿಸುತ್ತಾರೆ ... ಯಾಕೆಂದರೆ ಮಳೆಗಾಲ ಮುಗಿಯುತ್ತಲೇ ಮಂಗಮಾಯವಾಗುವ ನಿಮ್ಮ ಜಾಡನ್ನು ಹುಡುಕೋದು ಅಸಾದ್ಯದ ಮಾತು. ನೀವು ಹೋದ ಮೇಲೆ ಇಳೆಯಲ್ಲಿ ಆ ಕಳೆ ಇರುವುದೇ ಇಲ್ಲ!
ಈ ಅಗಣಿತ ಸುಮರಾಶಿಗಳು ಇರುವಷ್ಟು ದಿನ ಮಾತ್ರ ಫಲಧಾನ್ಯಗಳಿಂದ ಇನ್ನೇನು ಬಸಿರಾಗುವ ಇಳೆಯೆಂಬ ಗಂಧವತಿಯ ಮೈಯೆಲ್ಲ ಸುಗಂಧ ದ್ರವ್ಯದ ಘಮಲು ತುಂಬುತ್ತವೆ. ಅವನ್ನು ಗುರುತಿಸಿ ಘಮಿಸಿದವಗೆ ಮತ್ತು ಇಂದು ಅದರಿಂದ ದೂರವಾಗಿ ಎಲ್ಲೋ ಅವುಗಳ ನೆನಪಲ್ಲಿ ಹಾತೊರೆದು ಕನವರಿಸುವವಗೆ ಗೊತ್ತು. ನಿಜ! ಕೆಲವರು ಮಾತ್ರ ಜೀಮೂತದಿಂದ ಹನಿಯಾಗಿ ಇಳಿದ ವರ್ಷವನ್ನು ಬಾನಡಿಗೆ ಮೊಗವರಳಿಸಿ ಕೈ ಚಾಚಿ ನಿಂತು ಅನುಭವಿಸುತ್ತಾರೆ.ಇನ್ನು ಹಲವರು ನೀರಲ್ಲಿ ಬರೀ ಒದ್ದೆಯಾಗುತ್ತಾರಷ್ಟೇ ........
- ಕಾವ್ಯಮಯಿ
ಕಿಟಕಿಯಲ್ಲಿ ಕೈ ಚಾಚಿದರೆ ಮರುಭೂಮಿಯ ಈ ಪರನಾಡಿನಲ್ಲಿ ಮಳೆಯಿಲ್ಲ; ಕಣ್ಮನ ತಣಿಸು ಝರಿಯಿಲ್ಲ; ಒಡಲನ್ನು ಹಾಯೆನಿಸುವ ಬಯಲ ಗದ್ದೆಯ ಹಸುರಿಲ್ಲ; ಹಲಸಿನ ಕಾಯಿಯ ಕಡುಬಿಲ್ಲ; ! ಎಷ್ಟೋ ಲಕ್ಷ ಜನರಿಗೆ ಉದ್ಯೋಗ ನೀಡಿದ ಮಳೆಗೆ ಇಲ್ಲಿ ಉದ್ಯೋಗವಿಲ್ಲ!
ಹೌದು ಓದುಗರೇ , ಪ್ರತಿಬಾರಿ ಮಳೆಗಾಲ ಬಂದಾಗ ನನಗೆ ನನ್ನ ನಾಡು ಯಾಕೋ ತುಂಬಾನೇ ನೆನಪಾಗುವುದು. ಜಿಟಿಜಿಟಿ ಮಳೆಯಲ್ಲಿ ನೆನೆಯಲು ಆಸೆ ಹುಟ್ಟುವುದು.ಕಲ್ಲಣಬೆಯ ಪಲ್ಯ ತಿನ್ನಲು ಬಯಕೆಯಾಗುವುದು. ಎಲ್ಲದುಕಿಂತ ಹೆಚ್ಚಾಗಿ ಮನಸ್ಸು ಅರಳುವುದು ಮಳೆಗಾಲದ ಸುಂದರ ಪುಷ್ಪಗಳಿಗಾಗಿ.
ಪ್ರಕೃತಿ ನಮ್ಮ ಬದುಕಿನಲ್ಲಿ ಎಷ್ಟು ಬೆರೆತು ಹೋಗಿದೆ ಎಂದರೆ ಋತುಮಾನಗಳು ಅಷ್ಟು ಕಡಿಮೆ ಅವಧಿಯಲ್ಲಿ ಪರಿವರ್ತನೆಯಾಗಿ ಬಂದು ನಿಂದು ತಮ್ಮಕಾಯಕ ಮುಗಿಸಿ ಹೋಗಿಬಿಟ್ಟಿರುತ್ತವೆ. ನಮಗದರ ಅರಿವೇ ಇರುವುದಿಲ್ಲ . ಹೆಸರೇ ಅರಿಯದ ಅಸಂಖ್ಯಾತ ಪುಷ್ಪಗಳು ಪೃಥ್ವಿಯ ರೋಮರೋಮದಿಂದ ಪುಟಿದೆದ್ದು ಅರಳಿ ನಿಂತಿರುತ್ತವೆ. ಕೇವಲ ಮಳೆಯ ಆಗಮನದಿಂದ ! ಸುತ್ತೆಲ್ಲ ಪರಿಸರವು ಈ ಸುಮಗಳ ಸುವಾಸನೆಯ ಸಮ್ಮಿಶ್ರ ಹೊತ್ತು ತಂಗಾಳಿಯೊಂದಿಗೆ ಬೆರೆತು ಧರೆಯೆಲ್ಲ ಪಸರಿಸುತ್ತದೆ . ಬಿಳಿ,ಹಳದಿ,ಕೆಂಪು,ನೀಲಿ ಬಣ್ಣದ ವಿನ್ಯಾಸದ ಚಿತ್ರವಿಚಿತ್ರ ಹೂ-ಹಸಿರು ಮನೆಯ ಅಕ್ಕಪಕ್ಕದಲ್ಲೇ ಮೊಳಕೆ ಬಂದು ಹೂದೊಟವನ್ನೇ ಮಾಡಿಕೊಂಡಿರುತ್ತವೆ . ಈ ಬಗೆಯ ಸವಿಯನ್ನು ಪ್ರತಿಬಾರಿಯೂ ಅನುಭವಿಸುತ್ತಿದ್ದೆ. ಚಿಕ್ಕಂದಿನಲ್ಲಿ ಅವುಗಳನ್ನು ತಂದು ಮಾಲೆ ಮಾಡಿ ಆಟ ಆಡಿದ್ದು ಉಂಟು . ಹಗಲಲ್ಲಿ ಬುಟ್ಟಿ ತುಂಬಾ ತುಂಬಿಕೊಂಡು ಮೂಲೆಯಲ್ಲಿ ಬಚ್ಚಿಟ್ಟು ಸಂಜೆ ದುರ್ವಾಸನೆ ಬೀರಿದಾಗ ಮನೆಮಂದಿಯಿಂದ ಬೈಸಿದ್ದುಂಟು. ಹೂವು ಹೆಕ್ಕಲು ಹೋಗಿ ಚೇರಟೆ ಬಸವನ ಹುಳು ಮುಟ್ಟಿ ಪೆಚ್ಚು ಮೋರೆ ಹಾಕಿದ್ದೂ ಇದೆ. ಕೆಂಪು ಬಣ್ಣದ ಹೂವೊಂದನ್ನು ಟೀಚರ್ ಗೆ ಕೊಟ್ಟು ಮುಡೀರಿ ಎಂದು ಹಲ್ಲು ಕಿಸಿದಾಗ ಪಾಪ ಆ ಮಾಡರ್ನ್ ಟೀಚರ್ ಮುಡಿಯಲಾಗದೆ ಎಸೆಯಲಾಗದೆ 'ಆಮೇಲೆ' ಎನ್ನುತ್ತಾ ಬ್ಯಾಗಲ್ಲಿ ತೂರಿಸಿದ್ದೂ ಉಂಟಲ್ಲ ! ನನ್ನನ್ನು ಕಾಡುವ ಮಳೆರಾಯನ ಸಹಸ್ರ ಪುಷ್ಪ ಕುವರಿಯರೇ ಈ ಬಾರಿಯಾದರೂ ನಿಮ್ಮ ಮೈ ಸವರಬೇಕು.
ತಾವು ಮೇಲೆದ್ದು ಅರಳಿ ಮಳೆಗಾಲ ಮುಗಿದೊಡನೆ ಅಗೋಚರವಾಗುವ ಅದ್ಭುತಗಳು ಹುಟ್ಟಿ ಬರುವಾಗ ಡಂಗೂರ ಸಾರಿ ಬರೋಲ್ಲ .ಸದ್ದಿಲ್ಲದೇ ಹೋಗಿಯೂಬಿಡುತ್ತವೆ . ಭಾವಜೀವಿಗಳು ಖಂಡಿತವಾಗಿಯೂ ಈ ವಿಸ್ಮಯವನ್ನು ಕೃತಿಗಿಳಿಸುತ್ತಾರೆ ;ಚಿತ್ರಕಾರರು ಅದರ ಸುಂದರ ಚಿತ್ರಬಿಡಿಸುತ್ತಾರೆ . ಇನ್ನು ಕ್ರಿಯಾಶೀಲರು ತಮ್ಮ ಕ್ಯಾಮೆರ ಕಣ್ಣಲ್ಲಿ ಕ್ಲಿಕ್ಕಿಸುತ್ತಾರೆ ... ಯಾಕೆಂದರೆ ಮಳೆಗಾಲ ಮುಗಿಯುತ್ತಲೇ ಮಂಗಮಾಯವಾಗುವ ನಿಮ್ಮ ಜಾಡನ್ನು ಹುಡುಕೋದು ಅಸಾದ್ಯದ ಮಾತು. ನೀವು ಹೋದ ಮೇಲೆ ಇಳೆಯಲ್ಲಿ ಆ ಕಳೆ ಇರುವುದೇ ಇಲ್ಲ!
ಈ ಅಗಣಿತ ಸುಮರಾಶಿಗಳು ಇರುವಷ್ಟು ದಿನ ಮಾತ್ರ ಫಲಧಾನ್ಯಗಳಿಂದ ಇನ್ನೇನು ಬಸಿರಾಗುವ ಇಳೆಯೆಂಬ ಗಂಧವತಿಯ ಮೈಯೆಲ್ಲ ಸುಗಂಧ ದ್ರವ್ಯದ ಘಮಲು ತುಂಬುತ್ತವೆ. ಅವನ್ನು ಗುರುತಿಸಿ ಘಮಿಸಿದವಗೆ ಮತ್ತು ಇಂದು ಅದರಿಂದ ದೂರವಾಗಿ ಎಲ್ಲೋ ಅವುಗಳ ನೆನಪಲ್ಲಿ ಹಾತೊರೆದು ಕನವರಿಸುವವಗೆ ಗೊತ್ತು. ನಿಜ! ಕೆಲವರು ಮಾತ್ರ ಜೀಮೂತದಿಂದ ಹನಿಯಾಗಿ ಇಳಿದ ವರ್ಷವನ್ನು ಬಾನಡಿಗೆ ಮೊಗವರಳಿಸಿ ಕೈ ಚಾಚಿ ನಿಂತು ಅನುಭವಿಸುತ್ತಾರೆ.ಇನ್ನು ಹಲವರು ನೀರಲ್ಲಿ ಬರೀ ಒದ್ದೆಯಾಗುತ್ತಾರಷ್ಟೇ ........
- ಕಾವ್ಯಮಯಿ